ಬಾಲ್ಯ ವಿವಾಹ ಮುಕ್ತ ಸಮಾಜ: ಸುಭದ್ರ ಭವಿಷ್ಯದ ದಿಕ್ಸೂಚಿ
ದಿನಾಂಕ: 22-12-2025 | ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಶೇನಟ್ಟಿ.
ಬಾಲ್ಯ ವಿವಾಹ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವ ಸಾಮಾಜಿಕ ಪಿಡುಗು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಶೇನಟ್ಟಿಯಲ್ಲಿ "ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ" ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು "ಬಾಲ್ಯ ವಿವಾಹವನ್ನು ಬೆಂಬಲಿಸುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದರು.
![]() |
| ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುತ್ತಿರುವುದು |
ಜಾಗೃತಿ ಮತ್ತು ಸಂದೇಶ
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ಬಿ ತಾಯಣ್ಣವರ ಅವರು ಕಾರ್ಯಕ್ರಮ ಉದ್ಘಾಟಿಸಿ, "ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಬಾಲ್ಯ ವಿವಾಹದಿಂದ ಅವರ ಆರೋಗ್ಯ ಮತ್ತು ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ನಮ್ಮ ಗ್ರಾಮವನ್ನು ಬಾಲ್ಯ ವಿವಾಹ ಮುಕ್ತ ಗ್ರಾಮವನ್ನಾಗಿ ಮಾಡೋಣ" ಬಾಲ್ಯ ವಿವಾಹ ಮುಕ್ತ ಸಮಾಜ; ಸುಭದ್ರ ಭವಿಷ್ಯದ ದಿಕ್ಸೂಚಿ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು "ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ", "ಓದಲಿ ಹೆಣ್ಣು ಮಗು" ಎಂಬ ಘೋಷಣೆ ಕೂಗಿದರು.
ಕಾನೂನು ಅರಿವು ಮತ್ತು ಪ್ರತಿಜ್ಞೆ
ಶಾಲೆ ಶಿಕ್ಷಕರರಾದ ಶ್ರೀ ಶಿವಾನಂದ ಲೋಕಪ್ಪನವರ ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ರ ಬಗ್ಗೆ ಮಾಹಿತಿ ನೀಡಿದರು. ಇಂತಹ ಘಟನೆಗಳು ಕಂಡುಬಂದಲ್ಲಿ 1098 (ಚೈಲ್ಡ್ಲೈನ್) ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಿದರು.
1. ಬಾಲ್ಯ ವಿವಾಹದ ದುಷ್ಪರಿಣಾಮಗಳು
2. ಬಾಲ್ಯ ವಿವಾಹ ನಿಷೇಧ ಕಾಯ್ದೆ (Prohibition of Child Marriage Act)
ಮಕ್ಕಳಿಗೆ ಕಾನೂನಿನ ಅರಿವು ಇರುವುದು ಮುಖ್ಯ:
•ಕಾನೂನುಬದ್ಧ ವಯಸ್ಸು: ಭಾರತದ ಕಾನೂನಿನ ಪ್ರಕಾರ ವಿವಾಹವಾಗಲು ಹುಡುಗಿಗೆ 18 ವರ್ಷ ಮತ್ತು ಹುಡುಗನಿಗೆ 21 ವರ್ಷ ತುಂಬಿರಲೇಬೇಕು.
•ಶಿಕ್ಷೆ: ಬಾಲ್ಯ ವಿವಾಹ ಮಾಡುವುದು, ಮಾಡಿಸುವುದು ಅಥವಾ ಅದರಲ್ಲಿ ಭಾಗಿಯಾಗುವುದು ಅಪರಾಧ. ಇದಕ್ಕೆ ಜೈಲು ಶಿಕ್ಷೆ ಮತ್ತು ದಂಡದ ವಿಧಿಸಲಾಗುತ್ತದೆ.
•ಶೂನ್ಯ ವಿವಾಹ: ಬಾಲ್ಯ ವಿವಾಹಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ.
3. ಜಾಗೃತಿ ಮೂಡಿಸುವ ವಿಧಾನಗಳು
ಮಕ್ಕಳಲ್ಲಿ ಅರಿವು ಮೂಡಿಸಲು ಈ ಕ್ರಮಗಳನ್ನು ಕೈಗೊಳ್ಳಬಹುದು:
•ಬಾಲ ಸಂಘಗಳ ರಚನೆ: ಶಾಲಾ ಮಟ್ಟದಲ್ಲಿ ಮಕ್ಕಳ ಸಂಘಗಳನ್ನು ರಚಿಸಿ, ಬಾಲ್ಯ ವಿವಾಹದ ಬಗ್ಗೆ ಚರ್ಚೆ ಏರ್ಪಡಿಸುವುದು.
•ಜಾಥಾ ಮತ್ತು ಬೀದಿ ನಾಟಕ: ಹಳ್ಳಿಗಳಲ್ಲಿ ಮತ್ತು ಶಾಲಾ ಆವರಣದಲ್ಲಿ ನಾಟಕಗಳ ಮೂಲಕ ಇದರ ಭೀಕರತೆಯನ್ನು ಪ್ರದರ್ಶಿಸುವುದು.
•ಸಹಾಯವಾಣಿ 1098: ಯಾವುದೇ ಮಗುವಿಗೆ ಇಂತಹ ಸಂಕಷ್ಟ ಎದುರಾದರೆ ತಕ್ಷಣ 1098 (Childline) ಸಂಖ್ಯೆಗೆ ಕರೆ ಮಾಡಲು ತಿಳಿಸಿಕೊಡುವುದು.
•ಸ್ಫೂರ್ತಿದಾಯಕ ಕಥೆಗಳು: ಬಾಲ್ಯ ವಿವಾಹವನ್ನು ವಿರೋಧಿಸಿ ಸಾಧನೆ ಮಾಡಿದ ಧೀರ ಮಕ್ಕಳ ಕಥೆಗಳನ್ನು ಹೇಳುವುದು.
ನೆನಪಿಡಿ: ಮಗು ಎಂದರೆ ಕೇವಲ ಮನೆಯ ಆಸ್ತಿಯಲ್ಲ, ಅವರು ಈ ದೇಶದ ಭವಿಷ್ಯ. ಅವರಿಗೆ ಶಿಕ್ಷಣ ಮತ್ತು ಸ್ವತಂತ್ರವಾಗಿ ಬೆಳೆಯುವ ಹಕ್ಕಿದೆ.: ಬಾಲ್ಯ ವಿವಾಹ ನಿಷೇಧ ಪ್ರತಿಜ್ಞೆ :
"ನಾನು ಈ ಮೂಲಕ ಸತ್ಯನಿಷ್ಠೆಯಿಂದ ಪ್ರತಿಜ್ಞೆ ಮಾಡುವುದೇನೆಂದರೆ; ನಾನು ಯಾವುದೇ ಕಾರಣಕ್ಕೂ ಬಾಲ್ಯ ವಿವಾಹದಲ್ಲಿ ಭಾಗಿಯಾಗುವುದಿಲ್ಲ ಮತ್ತು ಅದನ್ನು ಬೆಂಬಲಿಸುವುದಿಲ್ಲ. 18 ವರ್ಷ ತುಂಬದ ಹೆಣ್ಣುಮಕ್ಕಳಿಗೆ ಮತ್ತು 21 ವರ್ಷ ತುಂಬದ ಗಂಡುಮಕ್ಕಳಿಗೆ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧ ಎಂಬುದನ್ನು ನನ್ನ ಸುತ್ತಮುತ್ತಲಿನವರಿಗೆ ತಿಳಿಹೇಳುತ್ತೇನೆ. ಪ್ರತಿಯೊಂದು ಮಗುವು ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದೆ ಎಂದು ನಾನು ನಂಬುತ್ತೇನೆ. ಬಾಲ್ಯ ವಿವಾಹವು ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಅಡ್ಡಿಯಾಗದಂತೆ ಜಾಗ್ರತೆ ವಹಿಸುತ್ತೇನೆ. ನನ್ನ ಗಮನಕ್ಕೆ ಬಾಲ್ಯ ವಿವಾಹದ ಪ್ರಕರಣಗಳು ಬಂದರೆ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1098 (ಮಕ್ಕಳ ಸಹಾಯವಾಣಿ) ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತೇನೆ. ಬಾಲ್ಯ ವಿವಾಹದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆರೋಗ್ಯದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತೇನೆ.
ನನ್ನ ಗ್ರಾಮ, ನಗರ ಮತ್ತು ದೇಶವನ್ನು ಬಾಲ್ಯ ವಿವಾಹ ಮುಕ್ತ ಮಾಡಲು ನಾನು ಸದಾ ಶ್ರಮಿಸುತ್ತೇನೆ."
ಜೈ ಹಿಂದ್



Comments
Post a Comment