Posts

ನಮ್ಮ ಸರ್ಕಾರಿ ಶಾಲೆ - ನಮ್ಮ ಹೆಮ್ಮೆ: ಕಾಶೇನಟ್ಟಿ ಶಾಲೆಯಲ್ಲಿ 2026-27ನೇ ಸಾಲಿನ ದಾಖಲಾತಿ ಆರಂಭ!

Image
ನಮಸ್ಕಾರ ಪೋಷಕರೇ ಮತ್ತು ಹಿತೈಷಿಗಳೇ, ​ನಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲೇನಟ್ಟಿ (ತಾ: ಅಳ್ನಾವರ, ಜಿ: ಧಾರವಾಡ) ಇಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ 1 ರಿಂದ 8ನೇ ತರಗತಿಯ ಪ್ರವೇಶಾತಿಗಳು ಅಧಿಕೃತವಾಗಿ ಆರಂಭವಾಗಿವೆ ಎಂದು ತಿಳಿಸಲು ನಾವು ಹೆಮ್ಮೆಪಡುತ್ತೇವೆ. ​ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಮತ್ತು ಗುಣಮಟ್ಟದ ಶಿಕ್ಷಣಕ್ಕಾಗಿ ಇಂದೇ ನಮ್ಮ ಶಾಲೆಯನ್ನು ಆಯ್ಕೆ ಮಾಡಿ. ನಮ್ಮ ಶಾಲೆಯಲ್ಲಿ ಲಭ್ಯವಿರುವ ವಿಶೇಷ ಸೌಲಭ್ಯಗಳು ಇಲ್ಲಿವೆ: ​ ನಮ್ಮ ಶಾಲೆಯ ಪ್ರಮುಖ ಸೌಲಭ್ಯಗಳು: ​ ಉಚಿತ ಪಠ್ಯಪುಸ್ತಕ ಮತ್ತು ಅಭ್ಯಾಸ ಪುಸ್ತಕಗಳು: ಕಲಿಕೆಗೆ ಪೂರಕವಾದ ಪರಿಕರಗಳನ್ನು ಉಚಿತವಾಗಿ ನೀಡಲಾಗುವುದು. ​ ಉಚಿತ ಸಮವಸ್ತ್ರ ಮತ್ತು ಪಾದರಕ್ಷೆ: ಎರಡು ಜೊತೆ ಉಚಿತ ಸಮವಸ್ತ್ರ ಹಾಗೂ ಒಂದು ಜೊತೆ ಶೂ ಮತ್ತು ಸಾಕ್ಸ್ ವಿತರಣೆ. ​ ಪೌಷ್ಟಿಕ ಆಹಾರ ಯೋಜನೆ: ಕ್ಷೀರಭಾಗ್ಯ, ರಾಗಿ ಮಾಲ್ಟ್ ಮತ್ತು ಮಧ್ಯಾಹ್ನದ ಬಿಸಿ ಊಟದ ಸೌಲಭ್ಯ. ​ ಹೆಚ್ಚುವರಿ ಪೌಷ್ಟಿಕಾಂಶ: ಮಗುವಿನ ಆರೋಗ್ಯಕ್ಕಾಗಿ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ. ​ ವಿದ್ಯಾರ್ಥಿವೇತನ: ಅರ್ಹ ಎಲ್ಲಾ ಮಕ್ಕಳಿಗೂ ಸರ್ಕಾರದ ವಿದ್ಯಾರ್ಥಿವೇತನ ಲಭ್ಯ. ​ ಶುದ್ಧ ಕುಡಿಯುವ ನೀರು: ಮಕ್ಕಳಿಗೆ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ. ​ ಪ್ರತಿಭಾ ಕಾರಂಜಿ ಮತ್ತು ಕ್ರೀಡೆ: ಶೈಕ್ಷಣಿಕ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ. ​ ಅನುಭವಿ ಶಿಕ್ಷಕರು:...

ಕಾಶೇನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಪೂಜೆ, ಬಿಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ - ನೀವೂ ಬನ್ನಿ!

Image
​               ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಶೈಕ್ಷಣಿಕ ಕೇಂದ್ರಬಿಂದುವಾಗಿರುವ ಕಾಶೇನಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಶಿಕ್ಷಣ, ಸಂಸ್ಕೃತಿ ಮತ್ತು ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟಗಳನ್ನು ಸಂಭ್ರಮಿಸುವ ಸುಸಂದರ್ಭ ಒದಗಿ ಬಂದಿದೆ. ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಹಾಗೂ ಸ್ಥಳೀಯ ಸಮುದಾಯದ ಸಹಯೋಗದೊಂದಿಗೆ, 2025-26ನೇ ಸಾಲಿನ ವಾರ್ಷಿಕ ಮಹೋತ್ಸವವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ.               ಇದೇ ಬರುವ ಫೆಬ್ರವರಿ 10, 2026 ರ ಮಂಗಳವಾರದಂದು ನಡೆಯಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮಸ್ತ ಶಿಕ್ಷಣ ಪ್ರೇಮಿಗಳನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ​ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು ಮತ್ತು ವೇಳಾಪಟ್ಟಿ ​ಈ ದಿನದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಲಾಗಿದೆ: ​1. ಜ್ಞಾನಾಧಿದೇವತೆಯ ಆರಾಧನೆ ಮತ್ತು ಭಾವಪೂರ್ಣ ವಿದಾಯ ​ ಸಮಯ: ಮುಂಜಾನೆ 11:00 ಗಂಟೆಗೆ ​ಕಾರ್ಯಕ್ರಮದ ಆರಂಭವು ವಿದ್ಯೆಯ ಅಧಿದೇವತೆಯಾದ ಸರಸ್ವತಿ ಪೂಜೆ ಯೊಂದಿಗೆ ನೆರವೇರಲಿದೆ. ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಮತ್ತು ಜ್ಞಾನಾರ್ಜನೆಗಾಗಿ ಪ್ರಾರ್ಥಿಸಲಾಗುತ್ತದ...

ಬಾಲ್ಯ ವಿವಾಹ ಮುಕ್ತ ಸಮಾಜ: ಸುಭದ್ರ ಭವಿಷ್ಯದ ದಿಕ್ಸೂಚಿ

Image
ದಿನಾಂಕ:  22-12-2025 | ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಶೇನಟ್ಟಿ. ​ಬಾಲ್ಯ ವಿವಾಹ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಡುವ ಸಾಮಾಜಿಕ ಪಿಡುಗು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಶೇನಟ್ಟಿ ಯಲ್ಲಿ  "ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ" ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ​ಕಾರ್ಯಕ್ರಮದ ಆರಂಭದಲ್ಲಿ, ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು "ಬಾಲ್ಯ ವಿವಾಹವನ್ನು ಬೆಂಬಲಿಸುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸುತ್ತಿರುವುದು ​ ಜಾಗೃತಿ ಮತ್ತು ಸಂದೇಶ ​ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ಬಿ ತಾಯಣ್ಣವರ  ಅವರು ಕಾರ್ಯಕ್ರಮ ಉದ್ಘಾಟಿಸಿ, "ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಬಾಲ್ಯ ವಿವಾಹದಿಂದ ಅವರ ಆರೋಗ್ಯ ಮತ್ತು ಭವಿಷ್ಯಕ್ಕೆ ಧಕ್ಕೆಯಾಗುತ್ತದೆ. ನಮ್ಮ ಗ್ರಾಮವನ್ನು ಬಾಲ್ಯ ವಿವಾಹ ಮುಕ್ತ ಗ್ರಾಮವನ್ನಾಗಿ ಮಾಡೋಣ"  ಬಾಲ್ಯ ವಿವಾಹ ಮುಕ್ತ ಸಮಾಜ; ಸುಭದ್ರ ಭವಿಷ್ಯದ ದಿಕ್ಸೂಚಿ ಎಂದು ಕರೆ ನೀಡಿದರು. ​ವಿದ್ಯಾರ್ಥಿಗಳು "ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ", "ಓದಲಿ ಹೆಣ್ಣು ಮಗು" ಎಂಬ ಘೋಷಣೆ ಕೂಗಿದರು. ​ ಕಾನೂನು ಅರಿವು ಮತ್ತು ಪ್ರತಿಜ್ಞೆ ​ಶಾಲೆ ಶಿಕ್ಷಕರರಾದ  ಶ್ರೀ ಶಿವಾನಂದ ಲೋಕಪ್ಪನವರ  ಅವರು ಬಾಲ್ಯ ವಿವಾಹ ನಿಷೇಧ ಕಾಯ್ದೆ-2006...